Mangalore and Udupi news
Blog

ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿ ಯುವಕನ ಬಂಧನ

ಮಂಗಳೂರು: ಯತ್ನಿಸುತ್ತಿದ್ದ ಗಾಂಜಾ ಮಾರಾಟಕ್ಕೆ ಆರೋಪದಲ್ಲಿ ಯುವಕನೋರ್ವನನ್ನು ಮುಲ್ಕಿ ಪೊಲೀಸರು ಕಾರ್ನಾಡ್ ಬಳಿ ಬಂಧಿಸಿದ್ದು 1.200 ಕೆಜಿ ಗಾಂಜಾ, ಸಾಗಾಟಕ್ಕೆ ಬಳಸಿದ ಆಟೊರಿಕ್ಷಾ, ಮಾರಾಟದಿಂದ ಬಂದ 300 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೃಷ್ಣಾಪುರ ನಿವಾಸಿ ಯತಿರಾಜ್ (27ವ) ಬಂಧಿತ ಆರೋಪಿ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


ಸೆ.14ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು (ಗಾಂಜಾ)ಸೇವನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಪಕ್ಷಿಕೆರೆ ಕಾಪಿಕಾಡು ನಿವಾಸಿ ಪ್ರಜ್ವಲ್, ಬೈಕಂಪಾಡಿ ಕೂರಿಕಟ್ಟಿ ನಿವಾಸಿ ಪ್ರಮೋದ್, ಸ್ಟೀವನ್ ರವರ ಮುಂದುವರಿದ ತನಿಖೆಯಿಂದ ಲಭಿಸಿದ ಮಾಹಿತಿಯಂತೆ ಆರೋಪಿ ಯತಿರಾಜ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related posts

Leave a Comment