Mangalore and Udupi news
Blog

ಕಾರ್ಯಕ್ರಮ ನಡೆಯುವ ಎಲ್ಲಾ ಸ್ಥಳಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಕೆ ಕಷ್ಟ; ನಿಯಮ ಬದಲಿಸುವಂತೆ ಸದನದಲ್ಲಿ ಶಾಸಕ ಡಾ. ಭರತ್‌ ಶೆಟ್ಟಿ ಆಗ್ರಹ

ಬೆಂಗಳೂರು: ದ.ಕ. ಜಿಲ್ಲೆಯಲ್ಲಿ ಹಬ್ಬಗಳ ಆಚರಣೆಗೆ ಪೊಲೀಸ್ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಕೈಗೊಂಡ ಕಾರಣ ನಮ್ಮ ಸಮಾಜಕ್ಕೆ ಹೊಸ ಸಮಸ್ಯೆ ಎದುರಾಗಿದೆ. ನಮ್ಮ ಜಿಲ್ಲೆಯಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪೊಲೀಸರ ಹಾಗೂ ಸರಕಾರ ಇಂತಹ ನಡೆಯಿಂದ ದುಡಿಯುವ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಮಂಗಳೂರು ಶಾಸಕ ಭರತ್‌ ಶೆಟ್ಟಿ ಅವರು ಸದನದ ಗಮನಕ್ಕೆ ತಂದರು.

ರಾತ್ರಿ 11: 30ಕ್ಕೆ ಧಾರ್ಮಿಕ ಕಾರ್ಯಕ್ರಮ ಮುಗಿಸಬೇಕು ಎಂಬ ಸರಕಾರದ ಸೂಚನೆ ಒಪ್ಪುವಂತಹದಲ್ಲ. ಕಾರ್ಯಕ್ರಮ ನಡೆಯುವ ಎಲ್ಲಾ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿ.ಸಿ. ಕ್ಯಾಮರಾ ಅಳವಡಿಕೆಯೂ ಕಷ್ಟ. ಇನ್ನೇನು ಗಣೇಶೋತ್ಸವ ಹಬ್ಬ ಹಾಗೂ ನವರಾತ್ರಿ ಹಬ್ಬ ಸಮೀಪಿಸುತ್ತಿದೆ, ಇದರ ಮೊದಲಾಗಿ ಸರಕಾರ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸದನದಲ್ಲಿ ಅವರು ಒತ್ತಾಯಿಸಿದರು.

Related posts

Leave a Comment