Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ಪ್ರಸ್ತುತಮಂಗಳೂರು

ಬೆಳ್ತಂಗಡಿ: ಹಾಡಹಗಲೇ ಕಾಣಿಕೆ ಡಬ್ಬಿ ಒಡೆದು ಕಳ್ಳತನ.!!

ಬೆಳ್ತಂಗಡಿ: ಕಾಣಿಕೆ ಡಬ್ಬಿಯನ್ನು ಒಡೆದು ಹಣ ಕಳ್ಳತನ ಮಾಡಿದ ಘಟನೆ ಮಂಗಳವಾರ ಹಗಲು ಹೊತ್ತಲ್ಲೇ ಮಂಗಳೂರು-ವಿಲ್ಲುಪುರ0 ರಾಷ್ಟ್ರೀಯ ಹೆದ್ದಾರಿಯ ಚಿಬಿದ್ರೆ- ಮುಂಡಾಜೆ ಗಡಿ ಭಾಗದ ರಸ್ತೆ ಬದಿ ಇರುವ ಶ್ರೀ ಉಳ್ಳಾಯ-ಉಳ್ಳಾಲ್ತಿ ಕಟ್ಟೆಯಲ್ಲಿ ನಡೆದಿದೆ.

ಮಧ್ಯಾಹ್ನ 11ರಿಂದ ಒಂದು ಗಂಟೆ ಅವಧಿಯೊಳಗೆ ಯಾರೋ ಕಳ್ಳರು ಡಬ್ಬಿಯನ್ನು ಒಡೆದು ಹಣವನ್ನು ದೋಚಿದ್ದಾರೆ. ವಾರಕ್ಕೆ ಒಮ್ಮೆ ಕಾಣಿಕೆ ಡಬ್ಬಿಯಿಂದ ಸಮಿತಿಯವರು ಹಣ ಸಂಗ್ರಹಿಸುತ್ತಿದ್ದರು.

ಸುಮಾರು 3 ಸಾವಿರ ರೂ.ಗಿಂತ ಅಧಿಕ ಕಾಣಿಕೆ ಜಮೆಯಾಗುತ್ತಿತ್ತು. ಕಳೆದ ನಾಲ್ಕು ದಿನಗಳ ಹಿಂದೆ ಹಣ ಸಂಗ್ರಹಿಸಿದ್ದು, 2 ಸಾವಿರ ರೂ.ಗಿಂತ ಅಧಿಕ ಹಣ ಕಳ್ಳತನವಾಗಿರಬಹುದು ಎಂದು ಇಲ್ಲಿನ ಮುಖ್ಯಸ್ಥ ಗಣೇಶ ಬಂಗೇರ ತಿಳಿಸಿದ್ದಾರೆ.

Advertisement

Related posts

Leave a Comment