ನವಚೇತನ ಸೇವಾಬಳಗ (ರಿ) ತೋಡಾರು ಇದರ, ನವಚೇತನ ಪಂಚಮಿಲನೋತ್ಸವ – 2025 ರ ಅಂಗವಾಗಿ, ಬಡವರಿಗೊಂದು ಸೂರು ಎಂಬ ಶೀರ್ಷಿಕೆಯ ಅಡಿಯಲ್ಲಿ ನವಚೇತನ ಗೃಹಯೋಜನೆ ಎಂಬ ಕಾರ್ಯಕ್ರಮದ ಮೊದಲ ಯೋಜನೆಯನ್ನು ಶ್ರೀ ಪ್ರವೀಣ್ ರಾಜ್ ಮಚ್ಚೆಂದ್ರನಾಥ ಬಾಬಾ ಉಳ್ಳಾಲ್ ಧರ್ಮದರ್ಶಿ ಶ್ರೀ ಭುವನೇಶ್ವರಿ ಆದಿನಾಥ ಸಿದ್ಧಪೀಠ ಇವರ ದಿವ್ಯಹಸ್ತದಲ್ಲಿ ಬೋಳ ಗ್ರಾಮ ಪಿಲಿಯೂರು ಶ್ರೀಮತಿ ಸುನಿತಾ ಶ್ರೀ ಸುಂದರ ದಂಪತಿಗಳಿಗೆ ಹಸ್ತಾಂತರಿಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ.ವಿ.ಸುನೀಲ್ ಕುಮಾರ್ ನೆರವೇರಿಸಿದರು. ಈ ಸಂಧರ್ಭದಲ್ಲಿ ಮಾಜಿ ತಾ.ಪಂ. ಅಧ್ಯಕ್ಷರಾದ ಜಯರಾಮ್ ಸಾಲ್ಯಾನ್ ಬೋಳ, ಮಹಾಬಲ ಮೂಲ್ಯ ಬೋಳ ಪಿಲಿಯೂರು, ಶ್ರೀ ವಿಜಯ ಶೆಟ್ಟಿ ಗುಂಡುಗಲ್ಲು ಬೋಳ, ದಿನೇಶ್ ಪೂಜಾರಿ ಬೋಳ, ಶ್ರೀ ರಾಜಶ್ರೀ ರಮೇಶ್ ನಾಯ್ಕ್, ಶ್ರೀ ಕಿರಣ್ ಶೆಟ್ಟಿ, ಶ್ರೀ ಅಶೋಕ್ ಶೆಟ್ಟಿ, ಶ್ರೀಮತಿ ಶ್ರುತಿ ಪ್ರಕಾಶ್ ಶೆಟ್ಟಿ, ಶ್ರೀ ಸೂರ್ಯ ಹಳೇಕಟ್ಟೆ, ಸತೀಶ್ ಶೆಟ್ಟಿ ಕೆಂಚನಕೆರೆ ಉಪಸ್ಥಿತರಿದ್ದರು.
ಈ ಒಂದು ಕಾರ್ಯಕ್ರಮದ ಯಶಸ್ವಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಹಕರಿಸಿದ ಸಮಾಜಸೇವಕರಾದ ನಟರಾಜ್ ಪಚ್ಚನಾಡಿ, ನವಚೇತನ ಸೇವಾ ಬಳಗ(ರಿ) ತೋಡಾರು ಇದರ ಅಧ್ಯಕ್ಷರಾದ ಕೀರ್ತನ್ ಪೂಜಾರಿ ಬೋಳ, ಸ್ಥಾಪಕಾಧ್ಯರಾದ ಸುಕೇಶ್.ಜಿ.ಅಂಚನ್ ತೋಡಾರು ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಈ ಗೃಹಯೋಜನೆಯ ಗೃಹ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ತನ್ನ ಕೆಲಸದ ಬಿಡುವಿನಲ್ಲಿ ಶ್ರಮಿಸಿದ ನಮ್ಮ ತಂಡದ ಸದಸ್ಯರಾದ ಕಿರಣ್ ಕುಲಾಲ್ ಸಾಣೂರು ಇವರನ್ನು ಸನ್ಮಾನಿಸಲಾಯಿತು.
