ಜೀವನದಲ್ಲಿ ಅದೇನೇ ಕಷ್ಟವಿದ್ದರೂ ಬದುಕು ನಡೆಸಲು ಒಂದು ಪುಟ್ಟದಾದರೂ ಮನೆ ಅತ್ಯವಶ್ಯಕ. ಹಸಿವು ನೀಗಲು ಅನ್ನ ಎಷ್ಟು ಮುಖ್ಯವೋ, ಅದೇ ರೀತಿ ಜೀವನ ನಡೆಸಲು ಮನೆಯೂ ಅತ್ಯಗತ್ಯ. ಇಂತಹದೇ ಒಂದು ಕಡು ಬಡತನದಲ್ಲಿ ದಿನ ಸಾಗಿಸುತ್ತಿದ್ದ ಪಡೀಲ್ ಭಟ್ರ ಬೆಟ್ಟು ನಿವಾಸಿ ಸುನೀತಾ ಎಂಬವರ ಮನೆ ಬಿದ್ದು ಹೋಗುವ ಪರಿಸ್ಥಿತಿಯಲ್ಲಿದ್ದ ಮನೆಯನ್ನು ಹೊಸದಾಗಿ ನಿರ್ಮಿಸುವುದಾಗಿ ಪಣತೊಟ್ಟ ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ಸಂಸ್ಥೆ ಕೇವಲ 6 ತಿಂಗಳಲ್ಲಿ ಹೊಸ ಮನೆ ನಿರ್ಮಿಸಿ ಸುನೀತಾ ಪೂಜಾರಿ ಅವರಿಗೆ ಆಶ್ರಯ ಕಲಿಸಿರುವುದು ಇಡೀ ಮಂಗಳೂರಿಗೆ ಹೆಮ್ಮೆ ತಂದೆನಿಸಿದೆ.
ದಿವಂಗತ ಮಂಜುನಾಥ್ ಮಂಗಳೂರು ಅವರ ಸವಿನೆನಪಿಗಾಗಿ ಶ್ರೀಯುತ ಮನೋಜ್ ಕೋಡಿಕೆರೆ ಸ್ಥಾಪಕಾಧ್ಯಕ್ಷರಾಗಿ ರೂಪುಗೊಂಡ ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಬಡ ಹಿಂದೂ ಕುಂಟುಂಬಗಳಿಗೆ ಹಲವು ರೀತಿಯಲ್ಲಿ ನೆರವಾಗುತ್ತಾ ಬಂದಿದೆ. ಇದೀಗ ಹೊಸದಾಗಿ ಮನೆ ಕಟ್ಟಿಕೊಡುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ ಎಂದರೆ ತಪ್ಪಾಗದು.
ಏಪ್ರಿಲ್ 22 ರಂದು ಸಂಜೆ ವಾಸ್ತುಪೂಜೆ, ನಂತರ ಏಪ್ರಿಲ್ 23 ರಂದು ಬೆಳಗ್ಗೆ ಸತ್ಯನಾರಾಯಣ ಪೂಜೆ ಹಾಗೂ, ಮನೆಯ ಗೃಹಪ್ರವೇಶ ನಡೆಸಿದ ಮಂಜಣ್ಣ ಸೇವಾ ಬ್ರಿಗೇಡ್ ಸಂಸ್ಥೆ ಮಧ್ಯಾಹ್ನ 12.30 ಕ್ಕೆ, ಚಿತ್ರಾಪುರ ಮಠದ ಸ್ವಾಮೀಜಿಗಳಾದ ಶ್ರೀಶ್ರೀಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದರ ದಿವ್ಯ ಹಸ್ತದಿಂದ ಸುನೀತಾ ಪೂಜಾರಿ ಅವರಿಗೆ ಹೊಸ ಮನೆಯ ಕೀ ಹಸ್ತಾಂತರ ಮಾಡುವ ಮೂಲಕ ಮನೆ ನಿರ್ಮಾಣದ ಕಾರ್ಯಕ್ಕೆ ಪೂರ್ಣವಿರಾಮ ಇಟ್ಟರು.
ಹಿಂದಿನ ದಿನ ರಾತ್ರಿ ವಾಸ್ತುಪೂಜೆಗೆ ಆಗಮಿಸಿದ್ದ ಬಿಜೆಪಿಯ ದಕ್ಷಿಣ ಮಂಗಳೂರು ವಿಭಾಗದ ಶಾಸಕರಾದ ವೇದವ್ಯಾಸ ಕಾಮತ್ ಮಾತನಾಡಿ ಸರಕಾರದಿಂದ ಸಿಗುವ ಸಕಲ ಸವಲತ್ತುಗಳ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿದರು.
ನಂತರ ಗೃಹಪ್ರವೇಶದ ದಿನ ಆಗಮಿಸಿದ್ದ ಚಿತ್ರಾಪುರ ಮಠದ ಸ್ವಾಮೀಜಿಗಳಾದ ಶ್ರೀಶ್ರೀಶ್ರೀ ವಿದ್ಯೆಂದ್ರ ತೀರ್ಥ ಶ್ರೀಪಾದರು ಹಾಗೂ ಇನ್ನೂ ಹಲವು ಪ್ರಮುಖರ ಉಪಸ್ಥಿತಿಯಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ನಡೆಸಿ, ಮನೆಯ ನಾಮ ಫಲಕವನ್ನು ಅನಾವರಣ ಮಾಡಿದರು. ಕಾರ್ಯಕ್ರಮದ ಬಗ್ಗೆ ಮಾತನಾಡಿದ ಶ್ರೀಪಾದರು ಸಂಸ್ಥೆಯು ಈ ರೀತಿ ಬಡವರಿಗೆ ಸೂರು ಕಲ್ಪಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳುತ್ತಾ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಸುನೀತಾ ಪೂಜಾರಿ ಅವರ ಕಷ್ಟಕ್ಕೆ ಹಲವಾರು ವರ್ಷಗಳಿಂದ ಹೆಗಲು ನೀಡಿ ಬಂದಿದ್ದ ಮನೋಜ್ ಭಟ್ರಬೆಟ್ಟು, ಶರಣ್ ಬಟ್ಟ್ರ ಬೆಟ್ಟು ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದರ ಜೊತೆಗೆ ಭಾರತ ಮಾತೆಯ ಸೇವೆ ನಿರ್ವಹಿಸಿದ ಪಡೀಲ್ ವೀರನಗರ ನಿವಾಸಿ ಭರತ್ ಏನ್. ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಾದ ಮಹೇಶ್ ಜೋಗಿ, ಸಾಮಾಜಿಕ ಮುಖಂಡರಾದ ಜಗದೀಶ್ ಗರೋಡಿ, ಸಾಮಾಜಿಕ ಮುಖಂಡರಾದ ಜಯಪ್ರಕಾಶ್ ವಾಮಂಜೂರ್, ವೇದಿಕೆಯಲ್ಲಿ ಇದ್ದರು. ಹಾಗೂ ಗಣ್ಯರಾದ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಶರಣ್ ಪಂಪ್ವೆಲ್, ಬಿಜೆಪಿ ಮುಖಂಡರಾದ ರಣದೀಪ್ ಕಾಂಚನ್, ನಂದನ್ ಮಲ್ಯ, ಕಾಪರೇಟರ್ ಶ್ರೀಮತಿ ಶೋಭಾ, ವಿಕ್ಕಿ ಪಡೀಲ್, ಬಜರಂಗದಳ ಪ್ರಮುಖರಾದ ಪ್ರದೀಪ್ ಪಂಪ್ವೆಲ್, ರವಿಂದ್ರ ನಿಕಂ, ನಮೋ ಮಂಗಳೂರು ಇದರ ಸ್ಥಾಪಕರಾದ ನರೇಶ್ ಶೆಣೈ, ಚೇತನ್ ಕಾಮತ್, ಸಮಾಜ ಸೇವಕರಾದ ಮೋಹನದಾಸ್ ಮರಕಡ, ಬ್ರಹ್ಮ ಬೈದರ್ಕಳ ಗರೋಡಿ ದೇವಸ್ಥಾನದ ಟ್ರಸ್ಟಿಗಳಾದ ವಾಮನ್ ಅಳಪೆ, ಭಗತ್ ಸಿಂಗ್ ಆರ್ಮಿ ಸ್ಥಾಪಕರಾದ ರೀತೇಶ್ ಉರ್ವಸ್ಟೋರ್, ವಿಶ್ವನಾಥ್ ಶೆಟ್ಟಿ ಉಡುಪಿ, ಮಾಜಿ ಕಾರ್ಪರೇಟರ್ ವಿಜಯ್ ಕುಮಾರ್, ಹಾಗೂ ಹಲವು ಸಂಘ ಸಂಸ್ಥೆಯ ಪ್ರಮುಖರು ಮತ್ತು ಮಂಜಣ್ಣ ಸೇವಾ ಬ್ರಿಗೇಡ್ ನ ಸರ್ವ ಸದಸ್ಯರು ಉಪಸ್ಥಿತಿಯಿದ್ದರು.
ಮಧುರಾಜ್ ಗುರುಪುರ ಕಾರ್ಯಕ್ರಮವನ್ನು ನಿರೂಪಿಸಿ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ನೆರೆದಿದ್ದವರಿಗೆ ತಿಳಿಸಿದರು.