ಸುರತ್ಕಲ್ : ಶ್ರೀ ವೀರಾಂಜನೇಯ ಫ್ರೆಂಡ್ಸ್ ಕುರುವರ ಬೆಟ್ಟು ಇದರ ನೂತನ ಲಾಂಛನ ಬಿಡುಗಡೆ ಕಾರ್ಯಕ್ರಮ ಶ್ರೀ ಕೋಡ್ದಬ್ಬು ದೈವಸ್ಥಾನ ಹೊಸಬೆಟ್ಟು ಇದರ ವಠಾರದಲ್ಲಿ ನಡೆದಿದೆ.
ಶ್ರೀ ವೀರಾಂಜನೇಯ ಫ್ರೆಂಡ್ಸ್ ಇದರ ನೂತನ ಲಾಂಛನವನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮನಾಪ ಸದಸ್ಯರಾದ ವರಣ್ ಚೌಟ, ಸರಿತಾ ಶಶಿಧರ್ ಸೇರಿದಂತೆ ಮುಖ್ಯಪ್ರಾಣ ಮಠ ಹೊಸಬೆಟ್ಟು ಇದರ ಮಾಧವ ರಾವ್, ಮಧುಸೂದನ್ ರಾವ್ ಹೊಸಬೆಟ್ಟು, ಜೀವನ್ ಹೊಸಬೆಟ್ಟು, ಲೀಲಾಧರ ಕಡಂಬೋಡಿ, ವಿಜಯ್ ಶೆಟ್ಟಿ ಹೊಸಬೆಟ್ಟು, ಮನೋಜ್ ಹೊಸಬೆಟ್ಟು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಿರಣ್ ಶೆಟ್ಟಿ ಪ್ರಾಸ್ತವನೆಗೈದು ನಿರೂಪಿಸಿದರು.
