Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಗಣರಾಜ್ಯೋತ್ಸವ : ಕರ್ನಾಟಕದ 21 ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ

Advertisement

ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಕೊಡಲಾಗುವ ರಾಷ್ಟ್ರಪತಿಗಳ ಪದಕ ಗೌರವಕ್ಕೆ ಕರ್ನಾಟಕದ 21 ಜನ ಪೊಲೀಸ್​ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಜನರಾಗಿದ್ದಾರೆ.

ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ ಮತ್ತು 19 ಜನ ಪೊಲೀಸರು ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ.

ವಿಶಿಷ್ಟ ಸೇವಾ ಪದಕ ಪುರಸ್ಕೃತರು

ಬಸವರಾಜು ಶರಣಪ್ಪ ಜಿಳ್ಳೆ- ಡಿಐಜಿಪಿ, ಕೆಎಸ್​ಆರ್​ಪಿ, ಬೆಂಗಳೂರು
ಹಂಜಾ ಹುಸೇನ್, ಕಮಾಂಡೆಂಟ್, ಕೆಎಸ್​ಆರ್​ಪಿ, ತುಮಕೂರು

ಶ್ಲಾಘನೀಯ ಸೇವಾ ಪದಕ ಪುರಸ್ಕೃತರು

ರೇಣುಕಾ ಕೆ ಸುಕುಮಾರ, ಡಿಐಜಿಪಿ, ಡಿಸಿಆರ್​ಇ, ಬೆಂಗಳೂರು
ಸಂಜೀವ ಎಂ ಪಾಟೀಲ್, ಎಐಜಿಪಿ, ಜನರಲ್​, ಪೊಲೀಸ್​ ಪ್ರಧಾನ ಕೇಂದ್ರ ಕಚೇರಿ
ಬಿಎಂ ಪ್ರಸಾದ್, ಕಮಾಂಡೆಂಟ್, ಐಆರ್​ಬಿ, ಕೊಪ್ಪಳ
ಗೋಪಾಲ್ ಡಿ ಜೋಗಿನ್, ಎಸಿಪಿ, ಸಿಸಿಬಿ ಬೆಂಗಳೂರು
ವೀರೆಂದ್ರ ನಾಯಕ್​ ಎನ್​, ಡೆಪ್ಯೂಟಿ ಕಮಾಂಡೆಂಟ್​, ಕೆಎಸ್​ಆರ್​ಪಿ, ಬೆಂಗಳೂರು
ಗೋಪಾಲಕೃಷ್ಣ ಬಿ ಗೌಡರ್​, ಡಿವೈಎಸ್​ಪಿ, ಚಿಕ್ಕೋಡಿ ಉಪ ವಿಭಾಗ, ಬೆಳಗಾವಿ
ಹೆಚ್​. ಗುರುಬಸವರಾಜ, ಪೊಲೀಸ್​ ಇನ್ಸ್​ಪೆಕ್ಟರ್​​, ಲೋಕಾಯುಕ್ತ, ಚಿತ್ರದುರ್ಗ
ಜಯರಾಜ್​ ಹೆಚ್​ ಪೊಲೀಸ್​ ಇನ್ಸ್​ಪೆಕ್ಟರ್​, ಗೋವಿಂದಪುರ ಪೊಲೀಸ್​ ಠಾಣ, ಬೆಂಗಳೂರು
ಪ್ರದೀಪ್​ ಬಿ ಆರ್​, ಸರ್ಕಲ್​ ಇನ್ಸ್​ಪೆಕ್ಟರ್​ ಆಫ್​ ಪೊಲೀಸ್​, ಹೊಳೆನರಸಿಪುರ ವೃತ್ತ, ಹಾಸನ
ಮೊಹಮದ್​ ಮುಕರಮ್​, ಪೊಲೀಸ್​ ಇನ್ಸ್​ಪೆಕ್ಟರ್ ಸಿಸಿಬಿ, ಬೆಂಗಳೂರು
ವಸಂತ್​ ಕುಮಾರ್​ ಎಂಎ, ಪೊಲೀಸ್​ ಇನ್ಸ್​ಪೆಕ್ಟರ್, ಬ್ಯುರೋ ಆಫ್​ ಇಮಿಗ್​ರೇಷನ್​
ಮಂಜುನಾಥ ವಿ.ಜಿ, ಎಎಸ್​ಐ ಸಿಐಡಿ, ಬೆಂಗಳೂರು
ಅಲ್ತಾಪ್​ ಹುಸೇನ್​ ಎನ್​ ದಖನಿ, ಎಎಸ್​ಐ, ಬೆಂಗಳೂರು
ಬಲೇಂದ್ರನ್​ ಸ್ಟೇಷನ್​ ಆರ್​ಹೆಚ್​ಸಿ, ಕೆಎಸ್​ಆರ್​ಪಿ, ಬೆಂಗಳೂರು
ಅರುಣಕುಮಾರ, ಸಿಹೆಚ್​ಸಿ, ಡಿಐಜಿಪಿ ಕಚೇರಿ, ಕಲಬುರಗಿ
ನಯಾಜ್​ ಅಂಜುಮ್​ ಎಹೆಚ್​ಸಿ ಡಿಪಿಓ, ಚಿಕ್ಕಮಗಳೂರು
ಶ್ರೀನಿವಾಸ ಎಂ, ಸಿಹೆಚ್​ಸಿ, ಡಿಸಿಪಿ ಪಶ್ಚಿಮ ವಿಭಾಗ ಕಚೇರಿ, ಬೆಂಗಳೂರು
ಅಶ್ರಪ್​ ಪಿ. ಎಂ, ಹಿರಿಯ ಗುಪ್ತ ಸಹಾಯಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು
ಶಿವಾನಂದ ಬಿ, ಸಿಹೆಚ್​​ಸಿ ಕುಂದಾಪುರ ಪೊಲೀಸ್​ ಠಾಣೆ, ಉಡುಪಿ

ಎಲ್ಲ ರಾಜ್ಯಗಳ ಪೊಲೀಸ್​, ಅಗ್ನಿಶಾಮಕ, ಗೃಹರಕ್ಷಕ ಮತ್ತು ಇತರೆ ಸೇವೆಗಳ ಒಟ್ಟು 942 ಸಿಬ್ಬಂದಿಯು 2025ರ ಗಣರಾಜ್ಯೋತ್ಸವ ಅಂಗವಾಗಿ ಕೊಡುವ ಶೌರ್ಯ ಮತ್ತು ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

Related posts

Leave a Comment