
ಸುರತ್ಕಲ್: ಎಲೆ ಅಡಿಕೆ ತರುವುದಾಗಿ ಮನೆಯಿಂದ ಹೋದವರು ಹಿಂದಿರುಗಿ ಬಾರದೆ ನಾಪತ್ತೆಯಾಗಿದ್ದ ವ್ಯಕ್ತಿ ಪತ್ತೆಯಾಗಿದ್ದಾರೆ.
ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಬೆಳ್ತಂಗಡಿ ನೇಲಳಿಕೆ ಪಡಂಗಡಿ ನಿವಾಸಿ ಶಿವಪ್ಪ ಮೂಲ್ಯ (76) ಎಂದು ಗುರುತಿಸಲಾಗಿದೆ.
ಶಿವಪ್ಪ ಮೂಲ್ಯ ಅವರು ದಿನಾಂಕ 21/12/2024 ರಂದು ಅಕ್ಕನ ಮಗನ ಮನೆಯಾದ ಮಿತೊಟ್ಟು ಹೊಸಬೆಟ್ಟು ಸುರತ್ಕಲ್ ಇಲ್ಲಿಗೆ ಬಂದಿದ್ದು, ಸಂಜೆ 6:00 ಗಂಟೆಗೆ ಎಲೆ ಅಡಿಕೆ ತರುವುದಾಗಿ ತಿಳಿಸಿ ಮನೆಯಿಂದ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ನಾಪತ್ತೆಯಾಗಿದ್ದ ಶಿವಪ್ಪ ಮೂಲ್ಯ ಅವರು 23/12/2024ರಂದು ರಾತ್ರಿ 8ಗಂಟೆ ಸಮಯಕ್ಕೆ ಮಂಗಳೂರಿನ ಕುದ್ರೋಳಿಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.