Mangalore and Udupi news
ಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರುರಾಜ್ಯ

ಕಾರ್ಕಳದ ಡಾ. ಅಭಿತ್ ಬಿ ಶೆಟ್ಟಿಗೆ “ವೈದ್ಯಕೀಯ ಉದ್ಯಮಿ ಪ್ರಶಸ್ತಿ”

Advertisement

ಉಡುಪಿ ಜಿಲ್ಲೆಯ ಕಾರ್ಕಳದ ಡಾ. ಅಭಿತ್ ಬಿ ಶೆಟ್ಟಿ ಅವರು ಪ್ರತಿಷ್ಠಿತ “2024ರ ವೈದ್ಯಕೀಯ ಉದ್ಯಮಿ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ದಿನ ಚೆನ್ನೈಯಲ್ಲಿ ನಡೆಯಲಿರುವ ಗ್ಲೋಬಲ್ ಹೆಲ್ತ್ ಕೇರ್ ಆಂಡ್ ವೆಲ್ವೆಸ್ ಅವಾರ್ಡ್ಸ್ ಆಂಡ್ ಕಾನ್ನರೆನ್ಸ್ ನಲ್ಲಿ ಪ್ರದಾನ ಮಾಡಲಾಗುತ್ತದೆ.

ಜನವೈದ್ಯ ಸಂಸ್ಥೆಯ ಸಂಸ್ಥಾಪಕರಾದ ಡಾ. ಅಭಿತ್ ಅವರು, ವೈದ್ಯರ ಮನೆ ಭೇಟಿ ಸೇವೆ ಎಂಬ ನಾವೀನ್ಯತೆಯನ್ನು ಪರಿಚಯಿಸಿ, ಆರೋಗ್ಯ ಸೇವೆಯನ್ನು ಸುಲಭಗೊಳಿಸಲು ಮತ್ತು ಜನಸಾಮಾನ್ಯರ ಪಾಲಿಗೆ ತಲುಪುವಂತೆ ಮಾಡಲು ಮಹತ್ವದ ಪ್ರಯತ್ನಗಳನ್ನು ಮಾಡಿದ್ದಾರೆ.

Related posts

Leave a Comment