(ಮಾ.12-15) ಕನಿಲದಾಯನ ವರ್ಷಾವಧಿ ಬಂಡಿ ನೇಮೋತ್ಸವ
ಸುರತ್ಕಲ್ : ಪಣಂಬೂರು ಮಾಗಣೆ ಶ್ರೀ ಕ್ಷೇತ್ರ ಕನಿಲ ಪಿಲಿಚಾಮುಂಡಿ, ಧೂಮಾವತಿ, ಜಾರಂದಾಯ ದೈವಸ್ಥಾನ ಕುಡುಂಬೂರು ಗುತ್ತು ಇಲ್ಲಿ ಮಾರ್ಚ್ 12ರಿಂದ 15ರವರೆಗೆ ಕನಿಲದಾಯನ ವರ್ಷಾವಧಿ ಬಂಡಿ ನೇಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ದಿನಾಂಕ 12-03-2025ನೇ ಬುಧವಾರ ಮೊದಲ್ಗೊಂಡು ದಿನಾಂಕ 15-03-2025 ವರೆಗೆ ಶ್ರೀ ಕ್ಷೇತ್ರ ಕನಿಲ ಪಿಲಿಚಾಮುಂಡಿ, ಧೂಮಾವತಿ, ಜಾರಂದಾಯ ದೈವಗಳ ವರ್ಷಾವಧಿ ಬಂಡಿ ನೇಮೋತ್ಸವ ನಡೆಯಲಿದೆ.
ಕಾರ್ಯಕ್ರಮಗಳ ವಿವರ:
ತಾ. 12-03-2025ನೇ ಬುಧವಾರ ಬೆಳಿಗ್ಗೆ 9.00ಕ್ಕೆ ನವಕ ಪ್ರಧಾನ ರಾತ್ರಿ ಗಂಟೆ 9.00ಕ್ಕೆ ಕುಡುಂಬೂರು ಗುತ್ತು ದೈವ ಚಾವಡಿಯಿಂದ ಶ್ರೀ ಕನಿಲ ದೈವಸ್ಥಾನಕ್ಕೆ ಭಂಡಾರ ಏರಿಸುವುದು. ತಾ.13-03-2025 ರಾತ್ರಿ ಗಂಟೆ 9.00ಕ್ಕೆ ಮೈಸಂದಾಯ, ಕಾಂತೇರಿ ಧೂಮಾವತಿ ಬಂಟ ಮತ್ತು ಬಬ್ಬರ್ಯ ದೈವಗಳ ಬಂಡಿ ನೇಮೋತ್ಸವ.
ತಾ. 14-03-2025 ರಾತ್ರಿ ಗಂಟೆ 9.00ಕ್ಕೆ ಜಾರಂದಾಯ ಬಂಟ ಮತ್ತು ಸರಳ ಧೂಮಾವತಿ ಬಂಟ ದೈವಗಳ ಬಂಡಿ ನೇಮೋತ್ಸವ. ತಾ. 15-03-2025 ರಾತ್ರಿ ಗಂಟೆ 8.00ಕ್ಕೆ ಪಿಲಿಚಾಮುಂಡಿ ದೈವದ ಪಡಿಯರಿ ದರ್ಶನ, ಎಣ್ಣೆ ಬೂಳ್ಯ. ಮತ್ತು ಅನ್ನಸಂತರ್ಪಣೆ. ರಾತ್ರಿ ಗಂಟೆ 10.00ಕ್ಕೆ ಪಿಲಿಚಾಮುಂಡಿ ದೈವದ ಬಂಡಿ ನೇಮೋತ್ಸವ.
