ಮಹಾಕುಂಭಮೇಳದಲ್ಲಿ ಫೇಮಸ್ ಆಗಿದ್ದ ಐಐಟಿ ಬಾಬಾ ಅಲಿಯಾಸ್ ಅಭಯ್ ಸಿಂಗ್ ಮೇಲೆ ಟಿವಿ ಡಿಬೆಟ್ ಶೋವೊಂದರ ಹಲ್ಲೆ ಮಾಡಲಾಗಿದೆ ಎಂದು ಅವರೇ ಆರೋಪಿಸಿದ್ದಾರೆ. ನೊಯ್ಡಾದ ಖಾಸಗಿ ಚಾನೆಲ್ವೊಂದರಲ್ಲಿ ಡಿಬೇಟ್ ಶೋನಲ್ಲಿ ಭಾಗಿಯದ್ದ ವೇಳೆ ಈ ಒಂದು ಘಟನೆ ಶುಕ್ರವಾರ ನಡೆದಿದೆ.
ಈ ವಿಚಾರವಾಗಿ ಈಗಾಗಲೇ ಪೊಲೀಸರಿಗೆ ದೂರು ನೀಡಿರುವ ಐಐಟಿ ಬಾಬಾ ಕೆಲವು ಕಾವಿ ಬಟ್ಟೆ ಧರಿಸಿದ ಜನರು ಬಂದು ನನ್ನ ಮೇಲೆ ಹಲ್ಲೆ ಮಾಡಿದರು. ನಾನು ನ್ಯೂಸ್ ರೂಮ್ನಲ್ಲಿದ್ದಾಗಲೇ ಒಳಗೆ ನುಗ್ಗಿ ಬಂದು ನನ್ನೊಂಂದಿಗೆ ದರ್ವರ್ತನೆ ತೋರಿದರು ಮತ್ತು ದೊಣ್ಣೆಯಿಂದ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ದೂರು ನೀಡಿದ್ದಾರೆ.
ಸದ್ಯ ಖಾಸಗಿ ಚಾನೆಲ್ನ ಆ ಒಂದು ವಿಡಿಯೋ ವೈರಲ್ ಆಗಿದ್ದು ಕೇಸರಿ ಬಟ್ಟೆ ಧರಿಸಿದ್ದ ಕೆಲವು ಸ್ವಾಮಿಜಿಗಳು ಹಾಗೂ ಮಾತಾಜಿಗಳು ಲೈವ್ನಲ್ಲಿಯೇ ಐಐಟಿ ಬಾಬಾನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಬಾಬಾ ಶೋಬಿಟ್ಟು ಆಚೆಗೆ ಹೊರಟಾಗ ನಿಮ್ಮನ್ನು ನೀವು ಧರ್ಮಪ್ರಚಾರಕರು ಅಂದುಕೊಂಡಿದ್ದರೆ ಭಯ ಯಾಕೆ ಪಡ್ತೀರಿ, ಓಡಿ ಯಾಕೆ ಹೋಗ್ತೀರಿ ಎಂದಿದ್ದಾರೆ.
ನಿಮ್ಮನ್ನು ನೀವು ಧರ್ಮಲಂಡ ಎಂದಾಗಿದ್ದರೆ ಓಡಿ ಹೋಗಿ ಎಂದು ಅವಹೇಳನ ಮಾಡಿದ್ದಾರೆ. ಈ ವೇಳೆ ಹಲ್ಲೆಯೂ ಕೂಡ ನಡೆದಿದೆ. ಪಾಕಿಸ್ತಾನದ ವಿರುದ್ಧ ಭಾರತ ಸೋಲುತ್ತೆ ಎಂದು ಹೇಗೆ ಹೇಳಿದೆ ಎಂದು ಕೂಡ ಸ್ವಾಮೀಜಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಐಐಟಿ ಬಾಬಾ ನೀಡಿದ ದೂರನ್ನು ಸ್ವೀಕರಿಸದ ಎಸ್ಹೆಚ್ಒ ಸೆಕ್ಟರ್ನ ಪೊಲೀಸ್ ಅಧಿಕಾರಿಗಳು ಅವರನ್ನು ಮನವೊಲಿಸಿ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
